7 Hot News
A Karnataka Times Affiliate Kannada News Portal

ಮಕ್ಕಳು ಮಾಡಿಕೊಳ್ಳುವ ಆಸೆ ಆಗುತ್ತಿದೆ ಎಂದು ವೇದಿಕೆಯ ಮೇಲೆ ಸಚಿವನ ಎದುರಿಗೆ ತನ್ನ ಆಸೆಯನ್ನು ಹೇಳಿದ ಖ್ಯಾತ ನಟಿ, ಸಚಿವನಿಗೆ ಗಾಳ ಬೀಸಿದ ನಟಿ ಹೇಳಿದ್ದೇನು ನೋಡಿ!!

advertisement

ಇತ್ತೀಚಿನ ದಿನಮಾನಗಳಲ್ಲಿ ನಟಿಯರು ಯಾವ ಸ್ಟಾರ್ ನಟರಿಗೂ ಕಡಿಮೆ ಇಲ್ಲದಂತಹ ಬೇಡಿಕೆ ಹಾಗೂ ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತಿದ್ದು ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಜನರ ಹೃದಯವನ್ನು ಗೆಲ್ಲುವುದರ ಜೊತೆಗೆ ಇತರೆ ಸ್ಟಾರ್ ಸೆಲೆಬ್ರಿಟಿಯನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗೆ ಸಿನಿಮಾ ರಂಗದಲ್ಲಿ ತೊಡಗಿಕೊಂಡಿರುವಂತಹ ನಟರು ಸಾಕಷ್ಟು ಕ್ರಿಕೆಟರ್, ರಾಜಕಾರಣಿಗಳು ಹಾಗೂ ಇನ್ನಿತರ ಕ್ಷೇತ್ರದಲ್ಲಿ ಫೇಮಸ್ ಆಗಿರುವಂತಹ ವ್ಯಕ್ತಿಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೊಸ ಬದುಕಿನ ಪಯಣವನ್ನು ಪ್ರಾರಂಭಿಸುತ್ತಿದ್ದಾರೆ.

advertisement

ಇದೆ ಹಾದಿಯಲ್ಲಿ ಹೋಗುವ ಮುನ್ಸೂಚನೆಯನ್ನು ನೀಡುತ್ತಿರುವಂತಹ ನಟಿ ಐಶ್ವರ್ಯ(Aisjwarya) ಅವರು ವೇದಿಕೆಯ ಮೇಲೆ ಮಕ್ಕಳು ಮಾಡಿಕೊಳ್ಳುವ ಹಿಂಗಿತವನ್ನು ವ್ಯಕ್ತಪಡಿಸುವುದರ ಜೊತೆಗೆ ಸಚಿವರೊಬ್ಬರಿಗೆ ಗಾಳ ಹಾಕುವ ಪ್ರಯತ್ನ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು ಐಶ್ವರ್ಯ ಅವರ ಈ ವರ್ತನೆಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

advertisement

ಅಷ್ಟಕ್ಕೂ ಐಶ್ವರ್ಯ ಪ್ರೀತಿಸುತ್ತಿರುವುದಾದರೂ ಯಾರನ್ನು? ವೇದಿಕೆಯ ಮೇಲೆ ಮಕ್ಕಳ ಬಗ್ಗೆ ಮಾತನಾಡಲು ಕಾರಣವೇನು? ಎಂಬ ಎಲ್ಲ ಸಂಕ್ಷಿಪ್ತ ವಿವರಗಳನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹೌದು ಗೆಳೆಯರೇ ನಿರೂಪಕಿಯಾಗಿ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದಂತಹ ಐಶ್ವರ್ಯ(Aisjwarya) ಅವರು ಮಾನಾಡಾ ಮೈಲಾಡಾ ಎಂಬ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಅದ್ಭುತ ಗೆಲುವನ್ನು ಸಾಧಿಸಿ ಪ್ರಸಿದ್ಧಿ ಪಡೆದರು.

advertisement

advertisement

ಆನಂತರ ನಾಯಕ ನಟಿಯಾಗಿ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ಐಶ್ವರ್ಯ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಾಕಷ್ಟು ಚಲನಚಿತ್ರಗಳಲ್ಲಿ ಅಭಿನಯಿಸುವ ಮೂಲಕ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗ ಹಾಗೂ ಬೇಡಿಕೆಯನ್ನು ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದಾದ ನಂತರ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಐಶ್ವರ್ಯ(Aisjwarya) ಇತ್ತೀಚಿಗಷ್ಟೇ ಶ್ರೀಲಂಕಾದ ನುವರಾ ಎಲಿಯ ಎಂಬ ಜಿಲ್ಲೆಯಲ್ಲಿ ಬಹಳ ಅದ್ದೂರಿಯಾಗಿ ಆಚರಿಸಿದಂತಹ ಪೊಂಗಲ್ ಹಬ್ಬದ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು.

advertisement

ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವಾಗ ಅಲ್ಲಿದ್ದ ಅಷ್ಟು ಜನಗಳು ಹಾಗೂ ಶ್ರೀಲಂಕಾ ಸಚಿವ ಜೀವನ್(Sri Lanka minister Jeevan) ಅವರ ಮುಂದೆ “ಕಾರ್ಯಕ್ರಮ ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಬಹಳ ಚೆನ್ನಾಗಿ ಮೂಡಿಬಂದಿದೆ ಕಾರ್ಯಕ್ರಮಕ್ಕೆ ಬರುವ ಮುಂಚೆ ಸಚಿವರಿಗೆ ವಯಸ್ಸಾಗಿದೆ ಅಂತ ನಾನು ಅಂದುಕೊಂಡಿದ್ದೆ ಆದರೆ ಸಚಿವರು ಯುವಕರಾಗಿದ್ದಾರೆ. ಅಲ್ಲದೆ ಹ್ಯಾಂಡ್ಸಮ್ ಕೂಡ ಹೌದು ನಾನು ನನ್ನ ಜೀವಮಾನದಲ್ಲೇ ಇದೆ ಮೊದಲ ಬಾರಿಗೆ ಇಷ್ಟು ಹ್ಯಾಂಡ್ಸಂ ಆಗಿರುವ ಯುವ ಸಚಿವರನ್ನು ನೋಡಿದ್ದು.

advertisement

ಜೀವನ್ರವರು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದು ನಾನು ಕೇಳ್ಪಟ್ಟಿದ್ದೇನೆ, ಅವರು ಮಾಡುತ್ತಿರುವಂತಹ ಕೆಲಸ ಇಂದಿಗೂ ಕೂಡ ಸಾಕಷ್ಟು ಬಡವರಿಗೆ ನೆರವಾಗಿದೆ. ನಮ್ಮ ಊರಿನಲ್ಲಿ ಇಂಥ ಒಬ್ಬ ಸಚಿವ ಇಲ್ಲವಲ್ಲ ಎಂದು ಹೊಟ್ಟೆಕಿಚ್ಚು ಆಗುತ್ತಿದೆ ಎನ್ನುವುದರ ಜೊತೆಗೆ ನನಗೂ ಮದುವೆಯಾಗಿ ಮಕ್ಕಳು ಮಾಡಿಕೊಳ್ಳುವ ಬಯಕೆ ಇದೆ, ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತೇನೆ” ಎನ್ನುವ ಮೂಲಕ ವೇದಿಕೆಯ ಮೇಲೆ ತಮ್ಮ ವೈಯಕ್ತಿಕ ವಿಚಾರಗಳ ಗುಟ್ಟನ್ನು ನಟಿ ಐಶ್ವರ್ಯ ದತ್ತು(Aishwarya Dattu) ಬಿಚ್ಚಿಟ್ಟರು.

advertisement

Leave A Reply

Your email address will not be published.