7 Hot News
A Karnataka Times Affiliate Kannada News Portal

ಬಿಗ್ ಬಾಸ್ ಮನೆಗೆ, ನಾವು ಕಾಣದ ಲೋಕವನ್ನು ಕಾಣೋರು ಯಾರು, ಎಂಬಂತೆ ಎಂಟ್ರಿ ಕೊಟ್ಟ ಸಂಗೀತಾ ಮತ್ತು ಪ್ರತಾಪ್! ಬಾತ್ ರೂಮ್ ನಲ್ಲಿ ಗೊಳಾಡಿ ಕಣ್ಣೀರಿಟ್ಟ ಕಾರ್ತಿಕ್!!

advertisement

ಸ್ನೇಹಿತರೆ ಬಿಗ್ ಬಾಸ್ ಸೀಸನ್ 10 ಕಾರ್ಯಕ್ರಮ ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಉ-ಗ್ರರೂಪಕ್ಕೆ ತಲುಪುತ್ತಿದೆ, ಬಿಗ್ ಬಾಸ್ ಕೊಟ್ಟಂತಹ ಟಾಸ್ಕ್ ಗಳನ್ನು ಸ್ಪರ್ಧಿಗಳು ತಮ್ಮ ವೈಯುಕ್ತಕ್ಕೆ ತೆಗೆದುಕೊಂಡು ಒಬ್ಬರ ಮೇಲೆ ಒಬ್ಬರು ಹೆಗರಿ ಹೆಗರಿ ಹೊಡೆದಾಡುವ ಮಟ್ಟಕ್ಕೆ ಇಳಿದುಬಿಟ್ಟಿದ್ದಾರೆ. ಬಿಗ್ ಬಾಸ್ ಸೀಸನ್ 10 ಆರಂಭದಿಂದಲೂ ಇದೇ ರೀತಿ ಸ್ಪರ್ಧಿಗಳು ತಮ್ಮ ತಮ್ಮಲ್ಲಿ ಜಗಳ ಆಡಿಕೊಂಡು ಬಿಗ್ ಬಾಸ್ ನೋಡುವ ಪ್ರೇಕ್ಷಕರಿಗೆ ಗೊಂದಲ ಉಂಟು ಮಾಡುತ್ತಿದ್ದಾರೆ.

advertisement

ಮೊನ್ನೆ ಅಷ್ಟೇ ನೀಡಿದ್ದ ರಾಕ್ಷಸರು ಗಂಧರ್ವರು ಟಾಸ್ಕ್ ನಲ್ಲಿ ಸಂಗೀತ ತಂಡ ಒಂದು ಕಡೆ ವರ್ತೂರು ಸಂತೋಷ್ ತಂಡ ಒಂದು ಕಡೆ. ಮೊದಲು ಟಾಸ್ಕ್ ಆರಂಭಿಸಿದ ಸಂಗೀತ ತಂಡದವರು ಗಂಧರ್ವರ ಮೇಲೆ ತಮ್ಮ ದ.ರ್ಪವನ್ನು ಮೆರೆದು ಇಡೀ ಮನೆಯನ್ನು ಚೆಲ್ಲಾಪಿಲ್ಲಿ ಮಾಡಿ ಬಿಗ್ ಬಾಸ್ ವೀಕ್ಷಕರು ಇದೆಂಥ ಆಟ ಎಂಬ ಮಟ್ಟಿಗೆ ಇವರು ತಮ್ಮ ವರ್ತನೆಯನ್ನು ತೋರಿದರು.

advertisement

advertisement

ನಂತರ ಮತ್ತೆ ಅದಲು ಬದಲಾದ ರಾಕ್ಷಸರು ಗಂಧರ್ವರು ತಮಗೆ ನೀಡಿದ ಹಿಂ.ಸೆಯನ್ನು ಈಗ ಅವರ ಮೇಲೆ ತೀರಿಸಿಕೊಳ್ಳಲು ಅವರ ರೀತಿ ಬೇಕಾಬಿಟ್ಟಿ ಆಜ್ಞೆಯನ್ನು ನೀಡಿ ಎಲ್ಲರೂ ರೋಷಗೊಳ್ಳುವಂತೆ ಮಾಡುತ್ತಿದ್ದರು. ಇದರ ಮಧ್ಯ ಎಂಟ್ರಿ ಕೊಟ್ಟ ಸಂಗೀತ ನಾವು ಅವರು ಹೇಳಿದ ಹಾಗೆ ಮಾಡುವುದು ಬೇಡ ಅದೆಲ್ಲ ರೂಲ್ಸ್ ನಲ್ಲಿ ಇಲ್ಲ ಅದಕ್ಕೆ ಏನೇ ಹೊಣೆಯಾದರೂ ನಾನು ಜವಾಬ್ದಾರಿ ಎಂದು ಹೇಳಿದ್ದರು.

advertisement

ಇದನ್ನು ಒಪ್ಪಿದ ಕಾರ್ತಿಕ್ ತನುಷ ಪ್ರತಾಪ್ ರಾಕ್ಷಸರು ಹೇಳಿದ ಆಜ್ಞೆಯನ್ನು ಪಾಲಿಸದೆ ಅವರಿಗೆ ತಿರುಗೇಟು ನೀಡಿದರು. ಇದರಿಂದ ಮನೆಯ ವಾತಾವರಣ ಅಲ್ಲೋಲಕಲ್ಲೋಲ ಆಗಿಹೋಗಿತ್ತು. ನೀರನ್ನು ಎರಚುವ ಟಾಸ್ಕಿನಲ್ಲಿ ಸಂಗೀತ ತಂಡ ಸೋಪಿನ ನೀರು ಉಪ್ಪಿನ ನೀರು ಸುರಿದು ಎದುರಾಳಿಗಳನ್ನು ಎದುರಿಸಲು ಮುಂದಾದರು. ಇದಕ್ಕೆಲ್ಲ ಕುಗ್ಗದೆ ವರ್ತೂರು ಸಂತೋಷ್ ತಂಡ ಟಾಸ್ ನಲ್ಲಿ ವಿಜಯ ಸಾಧಿಸಿತು.

advertisement

ನಿನ್ನೆಯ ದಿನ ನಡೆದ ನೀರು ಎರಚುವ ಟಾಸ್ಕ್ ನಲ್ಲಿ ವರ್ತೂರ್ ಸಂತೋಷ್ ತಂಡದ ಸ್ಪರ್ಧಿಗಳು ಸಂಗೀತ ಮತ್ತು ಪ್ರತಾಪ್ ಮೇಲೆ ಸೋಪಿನ ನೀರಿನಿಂದ ದಾ.ಳಿ ಮಾಡಿದರು. ಇದನ್ನು ಎದುರಿಸಲಾಗದೆ ಸಂಗೀತ ಕೆಳಗೆ ಬಿದ್ದು ಗೋಳಾಡಿದರು. ಪ್ರತಾಪ್ ಇನ್ನೂ ಹೇಳದ ಕಾರಣ ಬಿಗ್ ಬಾಸ್ ಟಾಸ್ಕ್ ಅನ್ನು ರದ್ದು ಮಾಡಿದರು. ಈಗ ಎಲ್ಲ ಜವಾಬ್ದಾರಿ ನನ್ನ ನಾನು ಬರುತ್ತೇನೆ ಎಂದಿದ್ದ ಸಂಗೀತ ಕನ್ನಡಕ ಹಾಕಿಕೊಂಡು ಕಣ್ಣು ಕಾಣದ ರೀತಿ ಬಂದು ಕುಳಿತುಕೊಂಡಿದ್ದಾರೆ. ನೀವು ಮಾಡಿದ ಕರ್ಮ ನಿಮ್ಮನ್ನು ಹಿಂಬಾಲಿಸಿದೆ ಎಂದು ಬಿಗ್ ಬಾಸ್ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.

advertisement

Leave A Reply

Your email address will not be published.