Meghana Raj ನಟಿ ಮೇಘನಾ ರಾಜ್ ಅವರು ಲಾಕ್ಡೌನ್ ಸಂದರ್ಭದಲ್ಲಿ ಅನುಭವಿಸಿದಂತಹ ದುಃಖ ನಿಜಕ್ಕೂ ಕೂಡ ಯಾರಿಗೂ ಬರಬಾರದಿತ್ತು ಎಂಬುದಾಗಿ ಪ್ರತಿಯೊಬ್ಬರೂ ಕೂಡ ಸದಾ ಕಾಲ ಬಯಸುತ್ತಾರೆ. ಯಾಕೆಂದರೆ ಆಗಷ್ಟೇ ಮದುವೆಯಾಗಿ ಹೊಸ ಜೀವನದ ಕನಸನ್ನು ಕಾಣುತ್ತಿದ್ದ ಜೋಡಿಗಳು ಬೇರ್ಪಟ್ಟಿದ್ದು ನಿಜಕ್ಕೂ ಕೂಡ ಕರ್ನಾಟಕದ ಪ್ರತಿಯೊಬ್ಬರಿಗೂ ಕೂಡ ದುಃಖವಿದೆ. ಹೌದು ಚಿರು ಸರ್ಜಾ ಅವರನ್ನು ಅದೇ ಸಂದರ್ಭದಲ್ಲಿ ಮೇಘನಾ ರಾಜ್ ಅವರು ಕಳೆದುಕೊಳ್ಳುತ್ತಾರೆ.
ಇನ್ನು ನಟಿ Meghana Raj ಅವರ ಒಂಟಿ ಜೀವನದಲ್ಲಿ ಆಸರೆಯಾಗಿದ್ದು ಅವರ ಏಕೈಕ ಮಗ ರಾಯನ್ ರಾಜ್ ಸರ್ಜಾ. ಕನ್ನಡಿಗರು ಅವರನ್ನು ಪ್ರೀತಿಯಿಂದ ಜೂನಿಯರ್ ಚಿರು ಸರ್ಜಾ ಎಂಬುದಾಗಿ ಕರೆಯುತ್ತಾರೆ. ಗಂಡನ ಅಗಲಿಕೆಯ ನಂತರ ಸಿನಿಮಾ ರಂಗದಿಂದ ಹಾಗೂ ಎಲ್ಲಾ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳೆಂದು ದೂರವಿದ್ದ ಮೇಘನಾ ರಾಜ್ ನಿಧಾನವಾಗಿ ಪರಿಸ್ಥಿತಿಗೆ ಹೊಂದಿಕೊಳ್ಳುವಂತಹ ಮನಸ್ಥಿತಿಗೆ ಬರುತ್ತಾರೆ. ಹೇಗಿದ್ದರೂ ಕೂಡ ಜನ ಅವರನ್ನು ಎರಡನೇ ಮದುವೆ ಯಾವಾಗ ಮಾಡಿಕೊಳ್ಳುತ್ತೀರಿ ಎಂಬುದಾಗಿ ಕೇಳುತ್ತಲೇ ಇದ್ದಾರೆ.
ಜನರಿಂದ ಇಷ್ಟೆಲ್ಲ questions ಎದುರಾದರೂ ಕೂಡ ಮೇಘನಾ ರಾಜ್ ಮತ್ತೆ ಕಿರುತೆರೆಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವುದು ಹಾಗೂ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಸೇರಿದಂತೆ ಹಲವಾರು ಕಾರ್ಯಗಳಲ್ಲಿ ತೊಡಗಿ ತನ್ನ ಮಗನ ಉತ್ತಮ ಭವಿಷ್ಯಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಇನ್ನು ಜನರಿಂದ ಕೇಳಲಾಗಿರುವ ಪ್ರಶ್ನೆಗೆ ಉತ್ತರ ಎಂಬಂತೆ ಸಿಹಿ ಸುದ್ದಿ ಒಂದನ್ನು ನಟಿ ಮೇಘನ ರಾಜ್ ಹಂಚಿಕೊಂಡಿದ್ದಾರೆ.

ಹೌದು ಗೆಳೆಯರೇ ಸಾಕಷ್ಟು ಸಮಯಗಳಿಂದ ಸಿನಿಮಾಗೆ ವಿರಾಮವನ್ನು ನೀಡಿದ್ದ ಮೇಘನಾ ರಾಜ್ ಈಗ ಮತ್ತೆ ಸಿನಿಮಾಗೆ ಮರು ಪಾದಾರ್ಪಣೆ ಮಾಡಲು ಸಜ್ಜಾಗಿ ನಿಂತಿದ್ದಾರೆ. ತತ್ಸಮ ತದ್ಭವ ಎನ್ನುವ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ Meghana Raj ಈ ಸಂತೋಷದ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
Kaatera: ಇತಿಹಾಸದಲ್ಲಿ ಇದೇ ಮೊದಲು ಕಾಟೇರ ಸಿನಿಮಾಗಾಗಿ ಡಿ ಬಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಗೊತ್ತಾ?
ಇನ್ನು ಈ ಸಿನಿಮಾ ಕನ್ನಡ ಹಾಗೂ ಮಲಯಾಳಂ ಎರಡು ಭಾಷೆಗಳಲ್ಲಿ ಕೂಡ ಬಿಡುಗಡೆಯಾಗುತ್ತಿದೆ. Meghana Raj ಅವರು ಹಂಚಿಕೊಂಡಿರುವ ಈ ಗುಡ್ ನ್ಯೂಸ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ತತ್ಸಮ ತದ್ಭವ ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.