ಸ್ನೇಹಿತರೆ, ನಾಡಿನದ್ಯಂತ ಗೌರಿ ಗಣೇಶ ಹಬ್ಬದ ವೈವಿಧ್ಯತೆ ಸಡಗರ ಸಂಭ್ರಮ ಹೆಚ್ಚಾಗುತ್ತಿರುವುದರಿಂದ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಗಣೇಶನ ಒಂದೊಂದು ಮಹಿಮೆಯ ಅನಾವರಣವಾಗುತ್ತಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಈ ಬಾರಿ ಗಣೇಶನೂ ಗಲ್ಲಿ ಗಲ್ಲಿಗಳಲ್ಲಿ, ಮನೆಯ ಅಂಗಳದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ದೊಡ್ಡ ಮಟ್ಟದ ಸೌಂಡ್ ಮಾಡುತ್ತಿದ್ದಾನೆ. ಹೌದು ಸೋಶಿಯಲ್ ಮೀಡಿಯಾಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಯೌಟ್ಯೂಬ್ನಂತಹ ಜಾಲಗಳಲ್ಲಿ ಗಣಪತಿ ಬಪ್ಪನ ಕುರಿತು ಯಾರಿಗೂ ತಿಳಿಯದಂತಹ ಮಾಹಿತಿಗಳು ಹರಿದಾಡುತ್ತಿವೆ.
ಅಲ್ಲದೆ ಪ್ರತಿ ಟಿವಿ ಚಾನಲ್ ನಲ್ಲಿಯೂ ಗಣೇಶನ ಮಹಿಮೆ ಯಂತದ್ದು ಎಂಬುದನ್ನು ಪ್ರಸಾರ ಮಾಡಲಾಗುತ್ತಿದೆ. ಅದರಂತೆ ನಾವಿವತ್ತು ಇಂಡೋನೇಷಿಯಾದ ನೋಟುಗಳ ಮೇಲೆ ಗಣೇಶನ ಫೋಟೋ ಯಾಕಿದೆ? ಇದರ ಅಸಲಿಯತ್ತೇನು ಎಂಬ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ. ಆದ್ದರಿಂದ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ| ನಿರ್ವಿಘ್ನಂ ಕುಲಮೇದೇವ ಸರ್ವ ಕಾರ್ಯದ್ದು ಸರ್ವದ||
ಮಾಡ ಹೊರಟಿರುವಂತಹ ಕೆಲಸಗಳಿಗೆ ಯಾವುದೇ ರೀತಿಯಾದಂತಹ ಅಡ್ಡಿ-ಆತಂಕಗಳು, ವಿಜ್ಞ ಎದುರಾಗದೆ ಇರಲಿ ಎಂದು ಪ್ರತಿಯೊಂದು ಕಾರ್ಯದಲ್ಲಿಯೂ ಮೊದಲಿಗೆ ಗಣೇಶನಿಗೆ ಪೂಜೆ ಸಲ್ಲಿಸುತ್ತಾ ನಂತರ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುವಂತಹ ಸಾಕಷ್ಟು ಜನರಿಗೆ ಇಂದು ವಿಶೇಷವಾದ ದಿನ ಎಂದರೆ ತಪ್ಪಾಗಲಾರದು. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ಹಿರಿಯರವರೆಗೂ ಗಣೇಶನನ್ನು ತುಂಬು ಮನಸ್ಸಿನಿಂದ ಪ್ರೀತಿಸುತ್ತಾರೆ ಹಾಗೂ ಆರಾಧಿಸುತ್ತಾರೆ. ಅದರಂತೆ ನಾಡಿನ ಸಮಸ್ತ ಜನತೆಯು ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿರುವಾಗ ನಾವು ವಕ್ರತುಂಡನ ಕುರಿತು ಯಾರಿಗೂ ತಿಳಿಯದ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ.
ಹೌದು ಗೆಳೆಯರೇ ನಮ್ಮ ಭಾರತದ ನೋಟುಗಳನ್ನು ನೋಡಿದರೆ ಗಾಂಧೀಜಿಯ ಭಾವಚಿತ್ರ ಹಾಗೂ ಚರಕದ ಫೋಟೋ ಇಲ್ಲವಾದರೆ ನಾಲ್ಕು ಮುಖದ ಸಿಂಹವಿರುವ ರಾಷ್ಟ್ರೀಯ ಲಾಂಛನದ ಚಿತ್ರವನ್ನು ಸಹಜವಾಗಿ ಕಾಣುತ್ತವೆ. ಆದರೆ ಎಂದಾದರೂ ಯಾವುದಾದರೂ ನೋಟುಗಳಲ್ಲಿ ದೇವರ ಮೂರ್ತಿ ಅದರಲ್ಲೂ ಗಣೇಶನ ಚಿತ್ರವಿರುವುದನ್ನು ಗಮನಿಸಿದ್ದೀರಾ? ಇಲ್ಲ ಅಲ್ವಾ! ಆದರೆ ಜನಸಂಖ್ಯೆಯಲ್ಲಿ 83.6ರಷ್ಟು ಮುಸ್ಲಿಮರೆ ಕೂಡಿರುವಂತಹ ದೇಶ ಇಂಡೋನೇಷಿಯಾದ 20000 ನೋಟುಗಳಲ್ಲಿ ಗಣೇಶನ ಚಿತ್ರ ಇರುವುದು ವಿಶೇಷತೆಯನ್ನು ಮೆರೆದಿದೆ. ಹೌದು ಗೆಳೆಯರೇ ಬರೋಬ್ಬರಿ 80% ನಷ್ಟು ಹಿಂದುಗಳೇ ತುಂಬಿರುವಂತಹ ನಮ್ಮ ಭಾರತದಲ್ಲಿ ಈ ರೀತಿ ದೇವರ ಚಿತ್ರ ಇರುವಂತಹ ನೋಟುಗಳನ್ನು ಸಾಧ್ಯವಿಲ್ಲ.
ಆದರೆ ಬೇರೆ ಧರ್ಮದವರಿರುವಂತಹ ಇಂಡೋನೇಷ್ಯಾದಲ್ಲಿ ಗಣೇಶನ ಚಿತ್ರದ ನೋಟು ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಅಲ್ಲಿನ ಜನರು ಈ ನೋಟನ್ನು ರೂಪಿಯಾ ಎಂದು ಕರೆಯುತ್ತಾರೆ. ಅಷ್ಟಕ್ಕೂ ಅಲ್ಲಿನ ಜನರ ನೋಟುಗಳಲ್ಲಿ ಹೀಗೆ ಗಣೇಶ ಚಿತ್ರ ಬರಲು ಕಾರಣವೇನು? ಇದರ ಹಿಂದಿನ ಅಸಲಿ ರಹಸ್ಯ ಏನಿರಬಹುದು? ಎಂದು ವಿಜ್ಞಾನಿಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಈ ಕುರಿತು ನಿಮಗೆ ಮಾಹಿತಿ ತಿಳಿದಿದ್ದಾರೆ ತಪ್ಪದೆ ನಮಗೆ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ ಹಾಗೂ ನೀವು ಗಣೇಶನ ಪರಮ ಭಕ್ತರಾಗಿದ್ದಾರೆ ಗಣಪತಿ ಬಪ್ಪ ಮೋರಿಯ ಎಂದು ನಮಗೆ ಕಾಮೆಂಟ್ ಮಾಡಿ.