7 Hot News
A Karnataka Times Affiliate Kannada News Portal

ಬಿಗ್ ಬಾಸ್ ಇಂದ ಹೊರಬಂದು ಕೂಡಲೇ ತಂದೆಯ ಸಮಾಧಿ ತೊಳೆದು ಪೂಜೆ ಸಲ್ಲಿಸಿದ ರಕ್ಷಕ್ ಬುಲೆಟ್! ತಂದೆಗೆ ತಕ್ಕ ಮಗ ಎಂದ ಜನತೆ!!

advertisement

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವಂತಹ ಬಿಗ್ ಬಾಸ್ ಸೀಸನ್ 10(Big boss season 10) ಪ್ರತಿದಿನ ಒಂದಲ್ಲ ಒಂದು ತಿರುವನ್ನು ತೆಗೆದುಕೊಳ್ಳುತ್ತಾ ಜನರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಲೇ ಇದೆ. ಅದರಂತೆ ಕಳೆದ ವಾರ ನಾಮಿನೇಟ್ ಆಗಿದ್ದಂತಹ ಘಟಾನುಘಟಿಗಳ ಮಧ್ಯೆ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಾ ಬುಲೆಟ್ (Rakshak Bullet) ಮನೆಯಿಂದ ಹೊರಗೆ ಹೋಗಿದ್ದು, ಬಿಗ್ ಬಾಸ್ ಮನೆಯಿಂದ ಬಂದ ತಕ್ಷಣ ತಮ್ಮ ತಾಯಿ ಹಾಗೂ ತಂದೆ ಇರುವಂತಹ ಸಮಾಧಿಯ ಬಳಿ ಹೋಗಿ ಪೂಜೆ ಸಲ್ಲಿಸಿದ್ದಾರೆ.

advertisement

ಈ ಕೆಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ತಂದೆ ಮತ್ತು ಅಜ್ಜಿಯ ಸ್ಮಾರಕಕ್ಕೆ ದೊಡ್ಡ ಹೋಮಾಲೆಯನ್ನು ಹಾಕಿ ಹಣೆಗೆ ಕುಂಕುಮವನ್ನಿಟ್ಟು ಎಲೆ ಅಡಿಕೆ ಹೂವನ್ನೆಲ್ಲ ಸಮರ್ಪಿಸಿ ಗಂಧದ ಕಡ್ಡಿಯನ್ನು ಬೆಳಗುತ್ತಾ ರಕ್ಷಕ ಅವರು ಪೂಜೆ ಮಾಡುತ್ತಿರುವಂತಹ ವಿಡಿಯೋ ಇದಾಗಿದೆ. ಹೌದು ಗೆಳೆಯರೇ ನಟ ಬುಲೆಟ್ ಪ್ರಕಾಶ್(Bullet Prakash) ಅವರ ಪುತ್ರ ರಕ್ಷಕ ಅವರು ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ತೀವ್ರವಾದ ಚರ್ಚೆಗೆ ಗುರಿ ಪಟ್ಟಿತ್ತು.

advertisement

ಹೌದು ಸ್ನೇಹಿತರೆ ತಮ್ಮ ತಂದೆ ಅಗಲಿದ ನಂತರ ಶರಣ್ ಮತ್ತು ನಿಷ್ವಿಕ ನಾಯ್ಡು ಅವರ ಅಭಿನಯದಲ್ಲಿ ಮೂಡಿಬಂದ ಗುರು ಶಿಷ್ಯರು (Guru Shishyaru) ಸಿನಿಮಾದಲ್ಲಿ ಕಾಣಿಸಿಕೊಂಡಂತಹ ರಕ್ಷಕ್ ಬುಲೆಟ್ ತಮ್ಮ ಕಡಕ್ ಮಾತುಗಳು ಹಾಗೂ ನೇರ ನುಡಿಯಿಂದ ಆರ್ ಬಾಸ್(R Boss) ಎಂದೆ ಪ್ರಖ್ಯಾತಿ ಪಡೆದಿದ್ದರು. ಅಲ್ಲದೆ ಸಂದರ್ಶನಗಳಲ್ಲಿ ಮಾತನಾಡುವಾಗ ಹಿಂದೆ ಮುಂದೆ ಯೋಚಿಸದೆ ಇದ್ದಿದ್ದನ್ನು ಇದ್ದ ಹಾಗೆ ಹೇಳುತ್ತಿದ್ದಂತಹ ರಕ್ಷಕ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು.

advertisement

advertisement

ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದಂತಹ ರಕ್ಷಕ್ ಅವರು, ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಿ, ತಮ್ಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ತೋರಿಸಿಕೊಟ್ಟರು. ಎಂತಹ ಟಾಸ್ಕ್ಗಳಾದರು ತಮ್ಮ 100% ಶ್ರಮ ವಹಿಸಿ ಗೆಲ್ಲುವ ನೆಟ್ಟಿನಲ್ಲಿ ಆಡುತ್ತಿದ್ದ ರಕ್ಷಕ್ ಎಂಟರ್ಟೈನ್ಮೆಂಟ್ ಎಂಬ ವಿಚಾರ ಬಂದಾಗ ಸುಮ್ಮನಾಗುತ್ತಿದ್ದರು. ಹೌದು ಸ್ನೇಹಿತರೆ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ ರಕ್ಷಕ್ ಎಂಟರ್ಟೈನ್ಮೆಂಟ್ ವಿಚಾರಕ್ಕೆ ಬಂದಾಗ ಸುಮ್ಮನಾಗುತ್ತಿದ್ದರು ರಕ್ಷಕ್ ಬೇರೆ ಯಾವುದರಲ್ಲಿಯೂ ಹೆಚ್ಚಾಗಿ ಆಕ್ಟಿವ್ ಇರಲಿಲ್ಲ.

advertisement

advertisement

ವಿನಯ್ ಗೌಡ(Vinay Gowda), ವರ್ತೂರ್ ಸಂತೋಷ್(Varthur Santhosh) ಮತ್ತು ತುಕಾಲಿ ಸಂತೋಷ್(Tukali Santhosh) ರವರ ಜೊತೆ ಮಾತ್ರ ಸೇರುತ್ತ ಗುಂಪಿನೊಳಗೆ ಒಂದಾಗಿದಂತಹ ರಕ್ಷಕ್ ಅವರು ಘಟಾನುಘಟಿಗಳಿರುವಂತಹ ಸ್ಪರ್ಧೆಯಲ್ಲಿ ಅತಿ ಕಡಿಮೆ ವೋಟ್ ಪಡೆದು ಮನೆಯಿಂದ ಹೊರ ಬಿದ್ದಿದ್ದಾರೆ ಇದು ಅವರ ಅಭಿಮಾನಿಗಳಿಗೆ ಕೊಂಚ ಬೇಸರವನ್ನು ಉಂಟು ಮಾಡಿದೆ. ಅದರಂತೆ ದೊಡ್ಮನೆಯಿಂದ ಹೊರಬಂದ ಕೂಡಲೇ ತಮ್ಮ ತಂದೆಯನ್ನು ನೆನೆದು ಅವರನ್ನು ನೋಡುವ ಸಲುವಾಗಿ ತಮ್ಮ ಜಮೀನಿನಲ್ಲಿ ಮಾಡಿರುವಂತಹ ಸ್ಮಾ-ರಕದ ಬಳಿ ಹೋದಂತಹ ರಕ್ಷಕ್(Rakshak) ತಾಯಿ ಹಾಗೂ ತಂದೆಯ ಸಮಾಧಿಗೆ ಹೂಮಾಲೆಯನ್ನು ಹಾಕಿ ಪೂಜೆ ಸಲ್ಲಿಸಿ ಭಕ್ತಿಯಿಂದ ಪ್ರಾರ್ಥಿಸಿದ್ದಾರೆ.

advertisement

Leave A Reply

Your email address will not be published.