ಸ್ನೇಹಿತರೆ, ಹಲವಾರು ವರ್ಷಗಳಿಂದ ನಮ್ಮ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದಂತಹ ನಟಿ ಲೀಲಾವತಿಯವರು ಇಂದು ವಯೋಪಡಿತ ಆರೋಗ್ಯ ಸಮಸ್ಯೆಯಿಂದಾಗಿ ಹಾಸಿಗೆ ಹಿಡಿದಿರುವ ಮಾಹಿತಿ ನಿಮ್ಮೆಲ್ಲರಿಗೂ ತಿಳಿದಿದೆ. ಇವರನ್ನು ನೋಡುವ ಸಲುವಾಗಿ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ರಾಜಕೀಯ ವ್ಯಕ್ತಿಗಳು ಬಂದು ಆರೋಗ್ಯ ಕ್ಷೇಮ ವಿಚಾರಿಸಿ ಹೋಗುತ್ತಿದ್ದು, ಅವರ ಬಳಿ ಲೀಲಾವತಿಯವರು ನನ್ನ ಮಗನ ಕೈ ಬಿಡಬೇಡಿ ಎಂದು ಕೋರಿಕೊಂಡಿದ್ದಾರೆ.
ಈ ದೃಶ್ಯ ಹೇಗಿತ್ತು ಎಂಬುದನ್ನು ತಿಳಿಯಬೇಕಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಸುಮಾರು 80-90 ದಶಕದಿಂದ ಕನ್ನಡ ಸಿನಿಮಾರಂಗವನ್ನು ಆಳಿದಂತಹ ಸಾಕಷ್ಟು ಜನಪ್ರಿಯ ನಟಿಯರ ಲೀಲಾವತಿ ಕೂಡ ಒಬ್ಬರು. ಆರು ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅದರಲ್ಲಿ 400 ಸಿನಿಮಾಗಳು ಕನ್ನಡವೇ ಆಗಿರುವುದು ಇನ್ನೂ ವಿಶೇಷ.
ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್, ಅನಂತನಾಗ್ ಹೀಗೆ ಕನ್ನಡದ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳ ತೆರೆ ಹಂಚಿಕೊಂಡು ತಮ್ಮ ಅಮೋಘ ಅಭಿನಯದ ಕಂಪನ್ನು ಸ್ಯಾಂಡಲ್ವುಡ್ ಸುತ್ತ ಬೀರಿದಂತಹ ಏಕೈಕ ನಟಿ ಎಂದರೆ ತಪ್ಪಾಗಲಾರದು. ಇನ್ನು ಯಾವುದೇ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ವಿಮರ್ಶೆಕದಿಂದ ಮೆಚ್ಚುಗೆ ಪಡೆಯುತ್ತಿದ್ದಂತಹ ಲೀಲಾವತಿಯವರು.
ಸಿಪಾಯಿ ರಾಮು, ಭಕ್ತ ಕುಂಬಾರ, ನಾಗರಹಾವು, ಗಾಳಿಗೋಪುರ, ಕಣ್ತೆರೆದು ನೋಡು, ಮಹಾಸತಿ ಅನುಸೂಯ, ಕಿತ್ತೂರು ಚೆನ್ನಮ್ಮ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕೋಟ್ಯಂತರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವವರು. ಇನ್ನು ಮಗನ ಬೆಳವಣಿಗೆಯಲ್ಲೂ ಜವಾಬ್ದಾರಿಯನ್ನು ಹೊತ್ತಂತಹ ಲೀಲಾವತಿಯವರು ಯಾರ ಸಹಾಯವು ಪಡೆಯದೆ.
ವಿನೋದ್ ರಾಜ್ ಸಿನಿಮಾದಲ್ಲಿ ಮುಂದುವರೆಯುವಂತೆ ಸಪೋರ್ಟ್ ಮಾಡಿದರು. ಆದರೆ ಯಾವಾಗ ಇವರಿಗೆ ಆಗದಂತಹ ಕೆಲವು ವ್ಯಕ್ತಿಗಳು ಬೇಕು ಬೇಕಂತಲೇ ಅಮ್ಮ ಮಗನ ಮೇಲೆ ಕಿಡಿ ಕಾರಲು ಪ್ರಾರಂಭಿಸಿದರೋ ಆಗ ಲೀಲಾವತಿ ಮತ್ತು ವಿನೋದ್ ರಾಜ್ ಸಂಪೂರ್ಣ ಸಿನಿಮಾ ರಂಗದಿಂದ ದೂರ ಉಳಿಯಲು ನಿರ್ಧರಿಸಿ ಕೃಷಿಯತ್ತ ತಮ್ಮ ಗಮನ ಹರಿಸಿದರು.
ಹೌದು ಗೆಳೆಯರೇ ತಮಗೆದ್ದಂತಹ ನಾಲ್ಕಾರು ಎಕರೆ ಭೂಮಿಯಲ್ಲಿ ಒಳ್ಳೆಯ ಫಸಲನ್ನು ತೆಗೆದು ಅದರಿಂದ ಬಂದಂತಹ ಲಾಭದ ಹಣದಲ್ಲಿ ಜನರ ಸೇವೆ ಮಾಡ ತೊಡಗಿದರು. ಹೌದು ಇತ್ತೀಚಿನ ಕೆಲವು ತಿಂಗಳುಗಳ ಹಿಂದೆ ಎಷ್ಟೇ ಲೀಲಾವತಿಯವರು ತಮ್ಮ ಚೆನ್ನೈನಲ್ಲಿ ಇದ್ದಂತಹ ಜಮೀನನ್ನು ಮಾರಿ ಜನರ ಆರೋಗ್ಯ ಕ್ಷೇಮಕ್ಕೆಂದು ನೆಲಮಂಗಲದ ಬಳಿ ಆಸ್ಪತ್ರೆಯನ್ನು ಕಟ್ಟಿಸಿ ಅದನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ಮಾಹಿತಿ ನಿಮ್ಮೆಲ್ಲರಿಗೂ ತಿಳಿದಿದೆ.
ಹೀಗೆ ವಯಸ್ಸಾದ ಕೊನೆಗಾಲದಲ್ಲಿಯೂ ಇತರ ಬಗ್ಗೆ ಒಳ್ಳೆಯದನ್ನೇ ಬಯಸಿದ ಲೀಲಾವತಿ ಅಮ್ಮನವರು ಇಂದು ವಯೋ ರೋ.ಗದಿಂದಾಗಿ ಹಾಸಿಗೆ ಹಿಡಿದಿದ್ದಾರೆ. ಹೌದು ದಿನೇ ದಿನೇಯಲ್ಲಿ ಲೀಲಾವತಿ ಅಮ್ಮನವರ ಆರೋಗ್ಯ ಕ್ಷಿಣಿಸುತ್ತಿದ್ದು, ಇವರನ್ನು ಕಾಣುವ ಸಲುವಾಗಿ ಸಿನಿಮಾ ಸೆಲೆಬ್ರೆಟಿಗಳು ಹಾಗೂ ರಾಜಕೀಯ ವ್ಯಕ್ತಿಗಳು ಮನೆಗೆ ಬಂದು ಹೋಗುತ್ತಿದ್ದಾರೆ. ಆ ಸಮಯದಲ್ಲಿ ಲೀಲಾವತಿ ಅಮ್ಮನವರು ನನ್ನ ಮಗನ ಕೈ ಬಿಡಬೇಡಿ ಎಂದು ಅವರಲ್ಲಿ ಹೇಳಿಕೊಂಡಿದ್ದಂಟು. ಇಂಥ ಅಮ್ಮ ಮಗನನ್ನು ಬೇರೆಲ್ಲಿ ಕಾಣಲು ಸಾಧ್ಯ? ಲೀಲಾವತಿ ಅಮ್ಮನವರು ಬೇಗ ಚೇತರಿಸಿಕೊಳ್ಳಲಿ ಎಂದು ಬೇಡುತ್ತಾ ತಪ್ಪದೆ ನಮಗೆ ಕಾಮೆಂಟ್ ಹಾಕಿ.