ಪತಿ ಪತ್ನಿ ಎನ್ನುವುದು ಪವಿತ್ರವಾದ ಸಂಬಂಧ. ಇದು ನಂಬಿಕೆಯ ಮೇಲೆಯೇ ನಿಂತಿರುವುದು. ಆದರೆ ಅದೆಷ್ಟೋ ಸಂಬಂಧಗಳಲ್ಲಿ ಎಲ್ಲಾ ಇದ್ದರೂ ನಂಬಿಕೆಯೇ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಆ ಸಂಬಂಧ ಉಳಿದುಕೊಳ್ಳುವುದೇ ಇಲ್ಲ. ಹೀಗೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ ನಡುವೆ ನಡೆದ ಘಟನೆ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಿ. ಈ ಘಟನೆ ನಡೆದಿದ್ದು ದೆಹಲಿಯಲ್ಲಿ. ನ್ಯಾನ್ಸಿ ಹಾಗೂ ಸಾಹಿಲ್ ಎಂಬವರು ಎರಡು ವರ್ಷಗಳ ಕಾಲ ಪ್ರೀತಿಸಿ 2017ರಲ್ಲಿ ಮದುವೆಯಾಗಿದ್ದರು.
ಸ್ನೇಹಿತರೊಬ್ಬರ ಬರ್ತಡೆ ಪಾರ್ಟಿಯಲ್ಲಿ ಮೀಟ್ ಮಾಡಿದ್ದ ಸಾಹಿಲ್ ಹಾಗೂ ನ್ಯಾನ್ಸಿ ನಡುವೆ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಇಬ್ಬರ ನಡುವೆ ಪ್ರೇಮಾಂಕುರವಾಯಿತು. ಆಗಿನ್ನೂ ನ್ಯಾನ್ಸಿ ಟಿನೇಜ್ ಹುಡುಗಿ. ಸಾಹಿಲ್ ಉದ್ಯಮಿಯಾಗಿದ್ದ. ಸಾಹಿಲ್ ನ್ಯಾನ್ಸಿಯನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಹೋದ. ನ್ಯಾನ್ಸಿ ಮನೆಯಲ್ಲಿ ಮದುವೆಗೆ ಒಪ್ಪಿಗೆ ಇರಲಿಲ್ಲ.
ಆದರೆ ಸಾಹಿಲ್ ಮನೆಯಲ್ಲಿ ಮನೆಯಲ್ಲಿ ಮಗ ಪ್ರಿತಿಸಿದ ಹುಡುಗಿಯನ್ನು ಒಪ್ಪಿಕೊಂಡರು. ಸಾಹಿಲ್ ಹಾಗೂ ನ್ಯಾನ್ಸಿ ಮೊದಮೊದಲು ಚೆನ್ನಾಗಿಯೇ ಇದ್ದರು. ಕ್ರಮೇಣ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಲು ಶುರುವಾದವು. ಕೊನೆಗೆ ಒಂದು ದಿನ ಪಾಣಿಪತ್ ನಲ್ಲಿ ನ್ಯಾನ್ಸಿ ಹೆ’ಣವಾಗಿ ಸಿಕ್ಕಳು. ಇದು ವ-ರದಕ್ಷಿಣೆ ಕಿ-ರು-ಕುಳ ನೀಡಿ ಸಾಹಿಲ್ ಪತ್ನಿಯ ಜೀವ ತೆಗೆದಿದ್ದಾನೆ ಎಂದು ಎಲ್ಲರೂ ತಿಳಿದರು.
ಸಾಹಿಲ್ ವಿರುದ್ಧ ಕೇಸ್ ಕೂಡ ದಾಖಲಾಯಿತು. ನ್ಯಾನ್ಸಿಯನ್ನು ಸಾಹಿಲ್ ಕೊ-ಲೆ ಮಾಡಿದ್ದು ನಿಜ. ಹೆಂಡತಿಯನ್ನು ಪಾಣಿಪತ್ ಗೆ ಕರೆದುಕೊಂಡು ಹೋಗಿದ್ದ ಸಾಹಿಲ್. ತನ್ನ ಸ್ನೇಹಿತ ಶುಭಂ ನ್ನು ಕಾರಿನ ಡ್ರೈವರ್ ಆಗಿ ಕರೆದುಕೊಂಡು ಹೋಗಿದ್ದ. ,ಕಾರಿನಲ್ಲಿಯೂ ಸಾಹಿಲ್ ಹಾಗೂ ನ್ಯಾನ್ಸಿ ಜಗಳ ಶುರು ಮಾಡಿಕೊಂಡರು. ಜ’ಗಳ ಜೋರಾಗಿ ಸಾಹಿಲ್ ತನ್ನ ಪತ್ನಿ ನ್ಯಾನ್ಸಿ ತಲೆಗೆ ಗುಂ’ಡಿಟ್ಟು ಜೀ’ವ ತೆ’ಗೆದ.
ಪಾಣಿಪತ್ ನಲ್ಲಿಯೇ ಅವಳ ಶ’ವ ಇನ್ನಿಲ್ಲವಾಗಿಸಿದ್ದ. ಮನೆಗೆ ಬಂದ ಸಾಹಿಲ್ ಕೆಲಸದ ನಿಮಿತ್ತ ನ್ಯಾನ್ಸಿ ದೆಹಲಿಯಿಂದ ಹೊರ ಹೋಗಿದ್ದಾಳೆ ಎಂದು ಹೇಲಿ ಎಲ್ಲರನ್ನೂ ನಂಬಿಸಿದ್ದ. ಕೊನೆಗೆ ನ್ಯಾನ್ಸಿ ನಾ’ಪತ್ತೆಯಾದ ದಿನ ಸಾಹಿಲ್ ಜೊತೆಗೆ ತೆಗೆದುಕೊಂಡ ಫೊಟೋದಲ್ಲಿ ನ್ಯಾನ್ಸಿ ಇರುವುದನ್ನು ನೋಡಿದ ನ್ಯಾನ್ಸಿ ಸ್ನೆಹಿತರು ನ್ಯಾನ್ಸಿಯ ತಂದೆಗೆ ವಿಷಯ ತಿಳಿಸುತ್ತಾರೆ.
ಕೂಡಲೇ ನ್ಯಾನ್ಸಿಯ ತಂದೆ ಮಗಳು ನಾ-ಪತ್ತೆಯಾಗಿರುವ ಬಗ್ಗೆ ಪೋಲೀಸರಿಗೆ ದೂರು ನೀಡುತ್ತಾರೆ. ವಿಚಾರಣೆಯ ವೇಳೆ ಸ್ನೇಹಿತ ಶುಭಂ ನ ಸಹಾಯ ಪಡೆದು ಸಾಹಿಲ್ ಹೆಂಡತಿಯನ್ನು ಮುಗಿಸಿರುವುದಾಗಿ ತಿಳಿಯುತ್ತದೆ. ಆದರೆ ಇದು ಎಲ್ಲರು ಅಂದುಕೊಂಡಂತೆ, ವ-ರದಕ್ಷಿಣೆಯ ಕೇಸ್ ಅಲ್ಲ. ನ್ಯಾನ್ಸಿ ಹಾಗೂ ಸಾಹಿಲ್ ನಡುವೆ ಬೇರೆಯದೇ ವಿಷಯ ನಡೆದಿತ್ತು. ಮದುವೆಯಾಗಿ ಸ್ವಲ್ಪ ಸಮಯ ಎಲ್ಲವೂ ಚೆನ್ನಾಗಿತ್ತು. ಆದರೆ ಚಿಕ್ಕ ವಯಸ್ಸಿನ ನ್ಯಾನ್ಸಿಗೆ ಬೇರೆಯವರ ಕಡೆ ಆಕರ್ಷಣೆಯಾಯಿತು.
ಆಕೆಯ ಮೇಲೆ ಅನುಮಾನ ಬಂದು ಆಕೆಯ ಮೊಬೈಲ್ ಚೆಕ್ ಮಾಡಿದಾಗ ಸಾಹಿಲ್ ಗೆ ಆಕೆಯ ಅ-ಕ್ರಮ ಸಂಬಂಧದ ಬಗ್ಗೆ ತಿಳಿಯುತ್ತದೆ. ಇದೇ ಕಾರಣಕ್ಕೆ ಇಬ್ಬರೂ ಜಗಳವಾಡುತ್ತಿದ್ದರು. ಕೊನೆಗೆ ವರದಕ್ಷಿಣೆ ಕೇ’ಸ್ ಹಾಕುವುದಾಗಿ ಹೆ’ದರಿಸಿದ್ದಳು. ಕೊನೆಗೆ ಸಾಹಿಲ್ ಆಕೆಯನ್ನೇ ಮು’ಗಿಸುವ ನಿರ್ಧಾರ ಮಾಡಿಬಿಟ್ಟ. ಸಂಬಂಧಗಳು ಕೇವಲ ಆಕರ್ಷಣೆಯಷ್ಟೇ ಆಗಿದ್ದರೆ ಇಂಥ ಅವಗಡಗಳೇ ಸಂಭವಿಸುತ್ತವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.