ಒಬ್ಬ ಕಲಾವಿದೆಯಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ಅಭಿನಯ ಇದೀಗ ಜೈಲು ಊಟ ತಿನ್ನುವ ಪರಿಸ್ಥಿತಿ ಎದುರಾಗಿದೆ. ಅವರು ತಮ್ಮ ಸಹೋದರನ ಹೆಂಡತಿಗೆ ಕಿರುಕುಳ ಕೊಟ್ಟಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯವು ಅಭಿನಯ, ಜಯಮ್ಮ ಹಾಗೂ ಚೆಲುವರಾಜ್ ಎಂಬವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಐದು ಜನರ ವಿರುದ್ಧ ದೂರು ದಾಖಲಾಗಿತ್ತು ಅದರಲ್ಲಿ ರಾಮಕೃಷ್ಣ ಹಾಗೂ ಶ್ರೀನಿವಾಸ್ ಇಬ್ಬರು ತೀ-ರಿಕೊಂಡಿದ್ದಾರೆ.
ಈ ಪ್ರಕರಣದ ಹಿನ್ನೆಲೆ ನೋಡುವುದಾದರೆ ಇದೊಂದು ವ-ರ-ದ-ಕ್ಷಿ-ಣೆ ಕೇ-ಸ್. ಅಭಿನಯ ಅವರ ಸಹೋದರ ಶ್ರೀನಿವಾಸ್ ಅವರನ್ನ ಲಕ್ಷ್ಮಿ ದೇವಿ ಎಂಬವರ ಜೊತೆ 1998ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ಬೆಂಗಳೂರಿನ ಚಂದ್ರಲೇಔಟ್ ನ ಚೌಟ್ರಿ ಒಂದರಲ್ಲಿ ಅದ್ದೂರಿಯಾಗಿ ಮದುವೆ ಮಾಡಲಾಗಿತ್ತು. ಜೊತೆಗೆ, 80,000 ನಗದು ಹಾಗೂ ಕಾಲು ಕೆಜಿ ಚಿನ್ನಾಭರಣಗಳನ್ನು ವ-ರ-ದ-ಕ್ಷಿ-ಣೆಯಾಗಿ ನೀಡಲಾಗಿತ್ತು ಎಂದು ಲಕ್ಷ್ಮಿ ದೇವಿ ಹೇಳಿದ್ದಾರೆ.
ಇನ್ನು ಮದುವೆಯ ನಂತರವೂ ಹಣ ತರಬೇಕು ಎಂದು ಅಭಿನಯ ಹಾಗೂ ಕುಟುಂಬಸ್ಥರು ಲಕ್ಷ್ಮಿ ದೇವಿ ಅವರಿಗೆ ಕಿರುಕುಳ ನೀಡುತ್ತಿದ್ದರಂತೆ. ಮದುವೆ ಆದ ಬಳಿಕವೂ ತವರು ಮನೆಯಿಂದ ವ-ರ-ದ-ಕ್ಷಿ-ಣೆ ತಂದು ಕೊಟ್ಟಿದ್ದಾರೆ. ಲಕ್ಷ್ಮೀದೇವಿ. 2002ರಲ್ಲಿ ಲಕ್ಷ್ಮೀದೇವಿ, ತನಗೆ ನೀಡಿದ ಕಿರುಕುಳದ ವಿರುದ್ಧ ಕೇಸ್ ದಾಖಲಿಸಿದ್ದರು.
ಆಗಲೇ ಐವರನ ವಿಚಾರಣೆ ಮಾಡಿ ಐವರಿಗೂ ಜೈಲು ಶಿಕ್ಷೆ ನೀಡಲಾಗಿತ್ತು ಆದರೆ, ಜಿಲ್ಲಾ ನ್ಯಾಯಾಲಯ ಐವರನ್ನು ಕೂಡ ಖುಲಾಸೆಗೊಳಿಸಿತ್ತು. ಆದರೆ ತನಗೆ ನ್ಯಾಯ ಸಿಗಲಿಲ್ಲ ಎನ್ನುವ ಕಾರಣಕ್ಕೆ ಲಕ್ಷ್ಮೀದೇವಿ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ನಟಿ ಅಭಿನಯ ಲಕ್ಷ್ಮಿ ದೇವಿ ಅವರಿಗೆ ಹಾವಿನಲ್ಲಿ ಕಚ್ಚಿಸಿದ್ದರು, ಕೇವಲ ಒಂದು ರೊಟ್ಟಿ ಒಂದು ಬಕೆಟ್ ನೀರನ್ನು ಅಷ್ಟೇ ಕೊಡುತ್ತಿದ್ದರು.
ಅಲ್ಲದೆ ಪರಪುರುಷನ ಜೊತೆಗೆ ಸಹಕರಿಸಿರಬೇಕು ಅದರಿಂದ ಹಣ ತಂದು ಕೊಡಬೇಕು ಎಂದು ಕೂಡ ಹೇಳುತ್ತಿದ್ದರು ಎನ್ನುವುದಾಗಿ ಲಕ್ಷ್ಮಿ ದೇವಿ ಗಂಭೀರ ಆರೋಪ ಮಾಡಿದ್ದಾರೆ ಜೊತೆಗೆ ನಾನು ಆ ಮನೆಯಲ್ಲಿ ಕೇವಲ ಒಂದು ವರ್ಷ ಇದ್ದೆ ನಾನು ಗರ್ಭಿಣಿ ಆದಾಗಲು ನನಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ.
ಕೇವಲ ಒಂದು ವರ್ಷ ಅವರ ಮನೆಯಲ್ಲಿ ಇದ್ದು ನಂತರ ನಾನು ನನ್ನ ತವರು ಮನೆಗೆ ಬಂದೆ ನನ್ನ ಅಮ್ಮ ಹಾಗೂ ತಮ್ಮಂದಿರು ನನ್ನನ್ನು ನೋಡಿಕೊಂಡಿದ್ದಾರೆ ಇದುವರೆಗೆ ಪರಿಹಾರವಾಗಿ ಒಂದು ರೂಪಾಯಿ ಕೂಡ ಕೊಟ್ಟಿಲ್ಲ. ಆರಂಭದಲ್ಲಿ 2ಸಾವಿರ ಸಿಗುತ್ತಿತ್ತು. ಕೊನೆಗೀ ಅದನ್ನೂ ನಿಲ್ಲಿಸಿದರು. ನಾನು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ನನ್ನನ್ನು ಕೆಲಸದಿಂದ ತೆಗೆಸಿದರು. ಎಂಬುದಾಗಿ ಲಕ್ಷ್ಮಿದೇವಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಬರೋಬ್ಬರಿ 20 ವರ್ಷದ ಬಳಿಕ ಲಕ್ಷ್ಮೀದೇವಿ ಅವರಿಗೆ ನ್ಯಾಯ ಸಿಕ್ಕಿದೆ. ನ್ಯಾಯಾಲಯದಲ್ಲಿ ಅವರ ಪರವಾಗಿ ತೀರ್ಪು ಬಂದಿದ್ದು ಅಭಿನಯ ಹಾಗೂ ಮನೆಯವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಆಗಿದೆ. ಆದರೆ ಈ ತೀರ್ಪಿನ ವಿರುದ್ಧ ನಾವು ಮತ್ತೆ ಕೋರ್ಟಿಗೆ ಹೋಗುತ್ತೇವೆ ಎಂದು ಅಭಿನಯ ತಿಳಿಸಿದ್ದಾರೆ.